‘ಚಿರವಾದ ನೆನಪು’ ಸ್ನೇಹ – ಪ್ರೀತಿ ಮೆರವಣಿಗೆ
Posted date: 26 Mon, May 2014 – 09:00:09 AM

ಚಿರವಾಗಿ ಉಳಿಯುವುದು ಪ್ರೀತಿಯೋ ಅಥವಾ ಸ್ನೇಹವೋ ಎಂಬುದು ಇಂದಿನ ಪೀಳಿಗೆಗೆ ಮನರಂಜನೆ ಜೊತೆ ಹೇಳುತ್ತಿದೆ ಮಾಯಾ ತೆರೆ ಕಂಬೈನ್ಸ್ ಚಿತ್ರ ಚಿರವಾದ ನೆನಪು ಬಿರುಸಿನಿಂದ ಚಿತ್ರೀಕರಣದಲ್ಲಿ ತೊಡಗಿದೆ.  

ಸ್ನೇಹದಲ್ಲಿ ಇದ್ದುಕೊಂಡು ಪ್ರೀತಿ ಬೆಲೆ ತಿಳಿಯದೆ ಇರುವ ಯುವ ಜನ ಈ ಚಿತ್ರದಿಂದ ಮನದಟ್ಟಾಗುವ ರೀತಿಯಲ್ಲಿ ಅರಿತುಕೊಳ್ಳಬಹುದು ಎಂಬುದು ನಿರ್ದೇಶಕ ವಿನ್ಸೆಂಟ್ ಅಂಥೋನಿ ಅವರ ಆಶಯ. ಪ್ರೀತಿ ಶಾಶ್ವತ ಎಂಬುದು ಅವರ ನಿಲುವು.

ಚಿಕ್ಕಬಾವರ ಬಳಿ ಇರುವ ಆರ್ ಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜ್ ಆವರಣದಲ್ಲಿ ಈ ಚಿರವಾದ ನೆನಪು ನಿರ್ದೇಶಕ ವಿನ್ಸೆಂಟ್ ಅಂಥೋನಿ ಯುವ ಪಡೆಯೊಂದಿಗೆ ಹಲವಾರು ಸನ್ನಿವೇಶಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ. ಜಿ ಸುರೇಶ್ ಹಾಗೂ ಮುತ್ಯಲ್ ಸಾಗರ್ ಅವರು ನಿರ್ಮಾಪಕರು.

ಪ್ರವೀಣ್ ಓಲಿವರ್ ಅವರ ಸಂಗೀತದಲ್ಲಿ ಐದು ಹಾಡುಗಳು ಒಳಗೊಂಡಿದೆ. ಕಾರ್ತಿಕ್ ಅವರ ಛಾಯಾಗ್ರಹಣ ಇರುವ ಈ ಚಿತ್ರದಲ್ಲಿ ಗುರುನಂದನ್ (ಸೈಬರ್ ಯುಗದೋಳ್.... ಖ್ಯಾತಿ) ಶರಣ್ಯ, ಸ್ನೇಹಿತ್, ತಾನ್ಯ, ಜೈ ಜಗದೀಶ್, ಹರೀಶ್, ಸಂಗೀತ ತಾರಾಗಣದಲ್ಲಿ ಇದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed