ಚಿರವಾಗಿ ಉಳಿಯುವುದು ಪ್ರೀತಿಯೋ ಅಥವಾ ಸ್ನೇಹವೋ ಎಂಬುದು ಇಂದಿನ ಪೀಳಿಗೆಗೆ ಮನರಂಜನೆ ಜೊತೆ ಹೇಳುತ್ತಿದೆ ಮಾಯಾ ತೆರೆ ಕಂಬೈನ್ಸ್ ಚಿತ್ರ ‘ಚಿರವಾದ ನೆನಪು’ ಬಿರುಸಿನಿಂದ ಚಿತ್ರೀಕರಣದಲ್ಲಿ ತೊಡಗಿದೆ.
ಸ್ನೇಹದಲ್ಲಿ ಇದ್ದುಕೊಂಡು ಪ್ರೀತಿ ಬೆಲೆ ತಿಳಿಯದೆ ಇರುವ ಯುವ ಜನ ಈ ಚಿತ್ರದಿಂದ ಮನದಟ್ಟಾಗುವ ರೀತಿಯಲ್ಲಿ ಅರಿತುಕೊಳ್ಳಬಹುದು ಎಂಬುದು ನಿರ್ದೇಶಕ ವಿನ್ಸೆಂಟ್ ಅಂಥೋನಿ ಅವರ ಆಶಯ. ಪ್ರೀತಿ ಶಾಶ್ವತ ಎಂಬುದು ಅವರ ನಿಲುವು.
ಚಿಕ್ಕಬಾಣವರ ಬಳಿ ಇರುವ ಆರ್ ಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜ್ ಆವರಣದಲ್ಲಿ ಈ ‘ಚಿರವಾದ ನೆನಪು’ ನಿರ್ದೇಶಕ ವಿನ್ಸೆಂಟ್ ಅಂಥೋನಿ ಯುವ ಪಡೆಯೊಂದಿಗೆ ಹಲವಾರು ಸನ್ನಿವೇಶಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ. ಜಿ ಸುರೇಶ್ ಹಾಗೂ ಮುತ್ಯಲ್ ಸಾಗರ್ ಅವರು ನಿರ್ಮಾಪಕರು.
ಪ್ರವೀಣ್ ಓಲಿವರ್ ಅವರ ಸಂಗೀತದಲ್ಲಿ ಐದು ಹಾಡುಗಳು ಒಳಗೊಂಡಿದೆ. ಕಾರ್ತಿಕ್ ಅವರ ಛಾಯಾಗ್ರಹಣ ಇರುವ ಈ ಚಿತ್ರದಲ್ಲಿ ಗುರುನಂದನ್ (ಸೈಬರ್ ಯುಗದೋಳ್.... ಖ್ಯಾತಿ) ಶರಣ್ಯ, ಸ್ನೇಹಿತ್, ತಾನ್ಯ, ಜೈ ಜಗದೀಶ್, ಹರೀಶ್, ಸಂಗೀತ ತಾರಾಗಣದಲ್ಲಿ ಇದ್ದಾರೆ.